ಮೌಲ್ಯಮಾಪನ

“ಆಕಾಶ” ನೀಲಿ ಇದ್ದಾಗೆಲ್ಲ
ನಮ ರಕ್ತ ಕೆಂಪು, ಕಂಪಾಗಿ
ಕವಲೊಡೆಯುತ್ತದೆ.
ಅದಕ್ಕೆ ಮೋಡ ತುಂಬುತ್ತ
ಗಟ್ಟಿಯಾಗುತ್ತಿದ್ದರೆ
ನಮ್ಮ ರಕ್ತ ಕಲಬೆರಕೆಯಾಗುತ್ತದೆ

“ಬ್ರಹ್ಮಾಂಡ” ತೇಜ ಪುಂಜವಾಗಿದ್ದರೆ
ನಮ್ಮ ಮಿದುಳು, ನರತಂತುಗಳು
ಚಿಗಿಯುತ್ತವೆ
ಅವುಗಳಿಗೆ ಗ್ರಹಣ ಬಡಿದರೆ
ನಮಗೆ ಕೋಮ ಹಿಡಿಯುತ್ತದೆ

“ನೀರು” ಪವಿತ್ರ
“ಗಾಳಿ” ಶುದ್ಧವಿದ್ದರೆ
ಗಂಗೆ ಯಮುನೆಯರಾಗಿ
ಹೃದಯ ವೈಶಾಲ್ಯತೆ ಹೊಂದಿ
ಮಾನವೀಯ ಮೌಲ್ಯಗಳೊಂದಿಗೆ
ಮೆರೆಯುತ್ತೇವೆ

ಅವೇ ಮದ್ಯವಾಗಿ
ವಿಷ ವರ್ತುಲಗಳಾದರೆ
ನಮಗೆ ಮಸಣ ಕರೆಯುತ್ತದೆ
“ಶಾಂತಿಯೇ ಸ್ವರ್ಗ
ಅಶಾಂತಿಯೇ ನರಕ” ದ
ಮೌಲ್ಯ ಮಾಪನದೊಳಗೆ
ಹಿಗ್ಗಿ ಕುಗ್ಗಿ ಸುಸ್ತಾಗಿ
ಎಲ್ಲಿ
ಗೊದ ಮೊಟ್ಟೆಗಳಾಗಿಯೇ
ಉಳಿಯುತ್ತೇವೆಯೋ? ಏನೋ?
ಎಂಬ ಹೆದರಿಕೆ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡೆಳೆ ದಾರ
Next post ಲಿಂಗಮ್ಮನ ವಚನಗಳು – ೩೮

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys